Slide
Slide
Slide
previous arrow
next arrow

ರಾಜ್ಯ ಸಮಗಾರ ಹರಳಯ್ಯ ಸಂಘಕ್ಕೆ ನಂದನ ಬೋರ್ಕರ್ ಆಯ್ಕೆ

300x250 AD

ಸಿದ್ದಾಪುರ: ಬೆಂಗಳೂರಿನ ನಾಗರಬಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ರಾಜ್ಯ ಸಮಿತಿಯ 33 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕ ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ನಂದನ್ ಬೋರ್ಕರ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸಂಘವು 1003 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 503 ಮತಗಳು ಚಲಾವಣೆಗೊಂಡವು. ಈ ಪೈಕಿ 330 ಮತಗಳನ್ನು ಪಡೆದ ನಂದನ್ ಹೆಚ್ಚು ಮತ ಪಡೆದವರಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ 58 ನಾಮಪತ್ರ ಸಲ್ಲಿಕೆಯಾಗಿತ್ತು. 2 ಅಭ್ಯರ್ಥಿಗಳು ಚುನಾವಣೆ ಯಿಂದ ಹಿಂದೆ ಸರಿದಿದ್ದರು ಅಂತಿಮವಾಗಿ 56 ಅಭ್ಯರ್ಥಿಗಳ ಕಣದಲ್ಲಿದ್ದರು. ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ ನಂದನ  ಅವರು ಎಲ್ಲರಿಗೂ  ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಸಮಾಜದ ಪರವಾಗಿ ಅನ್ಯಾಯದ ವಿರುದ್ಧ ಹಲವಾರು ಹೋರಾಟ ನಡೆಸಿ ಗಮನ ಸೆಳೆದಿದ್ದ ನಂದನ ಬೋರ್ಕರ್ ಆಯ್ಕೆಗೆ ಸಮಾಜದ ಗಣ್ಯರು, ಸ್ನೇಹಿತರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top